Pages

Saturday, September 27, 2014

ಹುಚ್ಚು ಬಿಡಬೇಕಿದೆ....!!!!

ಅಪಥ್ಯವಾದರೆ ಆಚೆ ತಳ್ಳಿ ಬಿಡಿ!!

ನಿನ್ನ ಅಭಿಪ್ರಾಯಕ್ಕಿಷ್ಟು ಮಣ್ಣು  ಹಾಕು
ಮೊದಲು ನಿನ್ನ ಧರ್ಮ ಹೇಳು
ಅದಕ್ಕನುಸಾರವೇ ನಿನ್ನ ಅಭಿಪ್ರಾಯವ ಆಲಿಸುವುದು

ನಿನ್ನ ಸಾಮಾಜಿಕ ಕಳಕಳಿ ಬದಿಗಿರಲಿ
ನಿನಗೆ 'ದೊಡ್ಡವರ' ಬೆಂಬಲವಿದೆಯಾ?
ಅದೇ ನಿನ್ನ ಕಳಕಳಿಗೆ ಮಾನದಂಡ.

ನಿನ್ನ ದೇಶದ ಬಗೆಗಿನ ಕಾಳಜಿ ಹಾಳಾಗಲಿ
ನಿನ್ನಲ್ಲಿ ದೇಶಪ್ರೇಮದ ಸರ್ಟಿಫಿಕೇಟ್ ಇದೆಯಾ?
ಅದಿದ್ದರೇನೇ ನಿನ್ನ ಕಾಳಜಿಯ ನಂಬುವುದು.

ಅನ್ನ ತಿಂದರೂ ಅನ್ಯಾಯವ ಬೆಂಬಲಿಸುವ
ಕಣ್ಣಿದ್ದೂ ಕುರುಡು ಹೊಗಳುಬಟ್ಟನಾಗುವವರ
ಮೆಚ್ಚಿಸಲು ಮಿಥ್ಯದ ಕುಂಡಿ ಮೂಸುವವರ
ಕುರಿತು ಬರೆಯಲು ಅಕ್ಷರಗಳೂ ಅಸಹ್ಯಪಡುತ್ತಿದೆ

ಅದಕ್ಕೇ ಬಲವಂತದ ಅಷ್ಷಿಷ್ಟು ಅಕ್ಷರಗಳ ಎತ್ತಿ
ಮನಸ್ಸಾಕ್ಷಿಗೆ ಮೋಸ ಮಾಡುವವರ ಮುಖಕ್ಕೆ ಒಗೆದು
ಮುಗ್ಧವಾಗಿ ಜಗವ ನೋಡುವ ಹುಚ್ಚು ಬಿಡಬೇಕಿದೆ!!

-ಕಂದ

No comments:

Post a Comment