ನಾ ಕವಿಯಲ್ಲ ಮಣ್ಣು
ಎಲ್ಲವೂ ನಿನ್ನ ಅಂದದಿಂದ
ಕದ್ದ ಪದಗಳು
~~
ಹೊಳೆದ ಭಾವಗಳು
ಅಕ್ಷರವಾಗದಾಗ
'ಹನಿ'ಯ ಭ್ರೂಣ ಹತ್ಯೆ
~~
ಮರೆತ ನೆನಪುಗಳಿಗೆ
ನೀರುಣಿಸಿ ಚಿಗುರಿಸುವ
ಮಳೆಯು ಮಹಾ ಕ್ರೂರಿ
~~
ಹರಿವ ಮಳೆನೀರಲಿ
ನೆನೆದ ನನ್ನೆದೆಯ ಭಾವವಿದೆ
ಮೆಟ್ಟಿಳಿಲಿದು ಬಾ
ಪಾದಗಳ ಸೋಕಲಿ ಸಾಕು
ನನ್ನ ನೋವು ಸಾರ್ಥಕ.
~~
ಮಳೆ ಮುಗಿದ ಮೇಲೆ
ಸವಾರಿ ಹೊರಡುವೆ
ನಿನ್ನ ನೆನಪುಗಳು ದಾರಿಯುದ್ದಕೂ
ಹನಿಯಾಗುತ್ತದೆ
ಹುಲ್ಲುಹಾಸುಗಳ ಮೇಲೆ....
~~
ಅಹುದು ಪುನರಾವರ್ತಿತ
ಮರೆತ ನೆನಪುಗಳಿಗೆ
ನೀರುಣಿಸಿ ಚಿಗುರಿಸುವ
ಮಳೆಯು ಮಹಾ ಕ್ರೂರಿ
-ಕಂದ .
No comments:
Post a Comment