Pages

Saturday, September 27, 2014

ಸಿಗ್ನಲ್ಗಳಲ್ಲಿ ಬರೆದಿದ್ದು....

ನನ್ನ ಪ್ರಶ್ನೆಗಳಿಗುತ್ತರಿಸುವ
ವ್ಯವಧಾನವಿಲ್ಲದವರು
ನಾ ಕಲ್ಪಿಸಿಕೊಂಡ ಉತ್ತರಗಳ
ಪ್ರಶ್ನಿಸಿದರು.
~~
ಸಿಗ್ನಲ್ ಗಳಲ್ಲಿ ಕೈ ಚಾಚುವ ಪುಟ್ಟ ಜೀವಗಳು.
ನೀಡಿದರೆ ವಿದ್ಯೆಯಿಂದ ವಂಚಿಸಿದ ಪಾಪಿಯೋ?
ನೀಡದಿದ್ದರೆ ಆ ಕಣ್ಣುಗಳಲ್ಲಿನ ಹಸಿವಿನ ತೋಡಿಕೆಗೆ ಕುರುಡಾದ ಹ್ರದಯಹೀನನೋ?
ದೇವನೇ ಇದೆಂತಹ ಸಂಕಟಮಯ ಸನ್ನಿವೇಶ?
~~
ಸತ್ಯ ಹೇಳುವವರನ್ನೆಲ್ಲ ಅನ್ಫ್ರೆಂಡ್ ಮಾಡಿದರೆ
ದುಷ್ಟ ಸ್ನೇಹಿತರ ಕೂಟ?
ಅಥವಾ ಎರಡು ಮುಖದವರ ಸಹವಾಸ???
~~
ಆತ ಮೊದಲು ಡೇರೆ ಕಟ್ಟಿ ಮಾವಿನ ಹಣ್ಣಿಟ್ಟಿದ್ದು
ಮೂಸಂಬಿಯವ,ಸೇಬಿನವ,ಬಾಳೆ,ಸಪೋಟದವರೆಲ್ಲ
ಅವನ ನೋಡಿ ಅಕ್ಕಪಕ್ಕ ಬಂದು ಇಟ್ಟವರು
ಈಗಲ್ಲಿ ನಿತ್ಯ ಜನಜಂಗುಳಿಯ ಹಣ್ಣಿನ ಸಂತೆ
ವಾವ್ ಒಬ್ಬನ ಕನಸು ಎಷ್ಟೊಂದು ಜನರ ತುತ್ತು?
~~
ಬಿಸಿಲಿಗೆ ಹಿಡಿಶಾಪವಿಡುತ್ತಿದ್ದವರ ನಡುವೆ
ಆತನೊಬ್ಬ ಗಡಿಗಡಿಗೆ ಸ್ತುತಿಸುತ್ತಿದ್ದ
ತನ್ನಷ್ಟಕೆ ಮುಗುಳ್ನಗುತಿದ್ದ.
ಜ್ಯೂಸು ವ್ಯಾಪಾರಿ ಇರಬಹುದೇ???

-ಕಂದ.

No comments:

Post a Comment