ಇಲ್ಲ ನಾ ಫೇಸ್ಬುಕ್ ಕವಿಯಲ್ಲ
ಅಮ್ಮ ಕೋಪಿಸಿಕೊಂಡರೆ
ದೂರದ ಬೋಳುಗುಡ್ಡೆಯಲಿ
ಹೆಸರರಿಯದ ಮರದಡಿಯಲಿ ಕುಳಿತು
ಕಲ್ಲುಗಳೊಂದಿಗೆ ಜಗಳವಾಡುವ ಮಗ.
ನನ್ನವಳು ಮುನಿಸಿಕೊಂಡರೆ
ನನ್ನೂರ ನದಿ ದಂಡೆಯಲಿ ಕುಳಿತು
ಮರಳುಗಳಿಗೆ ಕಣ್ಣೀರು ಬೆರೆಸುವ
ಮುಗ್ಧ ಪ್ರೇಮಿ.
ನ್ಯಾಯವು ಕೊಲ್ಲಲ್ಪಡುತ್ತಿದ್ದರೆ
ಕತ್ತಿಯ ಅಗುಲಿಗೆ ಅಕ್ಷರಗಳ ಅಡ್ಡವಿಟ್ಟು
ತಡೆಯಲು ಯತ್ನಿಸುವ ಮನುಷ್ಯ ಜೀವಿ.
ಇಲ್ಲ ನಾ ಕವಿಯೇ ಅಲ್ಲ.
ನಾ ಭಾವನೆಗಳ ತಡೆಹಿಡಿಯಲಾಗದ
ದುರ್ಬಲ ಜೀವಿ.
-ಕಂದ
������
ReplyDelete